Category: ದಾವಣಗೆರೆ

Home ದಾವಣಗೆರೆ

ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ : ಸೋಮಣ್ಣ ಸಂತಸ

ಭಾರತದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ನಗರದ ಸಾಮಾಜಿಕ ಸೇವಾ ಕಾರ್ಯಕರ್ತ ಜೆ. ಸೋಮನಾಥ್ ಅಭಿನಂದಿಸಿದ್ದಾರೆ.

ಕವಿತಾಳದಲ್ಲಿ ತ್ರಯಂಬಕೇಶ್ವರ ಜಾತ್ರೆ

ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಶ್ರೀ ತ್ರಯಂಬಕೇಶ್ವರ ಜಾತ್ರೆಯ ಅಂಗವಾಗಿ ಶ್ರೀ ತ್ಯಯಂಬಕೇಶ್ವರನ ರಥೋತ್ಸವವು ನಾಡಿದ್ದು ದಿನಾಂಕ 17 ರಂದು ಸಂಜೆ 6 ಕ್ಕೆ ಜರುಗಲಿದೆ.

ಪತ್ರಿಕಾ ವಿತರಕರಿಂದ ಅಂಬೇಡ್ಕರ್ ಜಯಂತಿ

ನಗರದ ಪತ್ರಿಕಾ ವಿತರಕರು ಮತ್ತು ವಾಯು ವಿಹಾರ ಬಳಗದ ವತಿಯಿಂದ ಪಿ.ಬಿ. ರಸ್ತೆಯಲ್ಲಿರುವ ರಮೇಶ್ ಕಾಫಿ ಬಾರ್ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.

2 ಲಕ್ಷದ ಒಂದು ರೂ.ಗೆ ನಿಶಾನೆ ಪಡೆದ ದೇವರಮುನಿ ಶಿವಕುಮಾರ್

ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ 101ನೇ ರಥೋತ್ಸವದಲ್ಲಿ 2 ಲಕ್ಷದ ಒಂದು ರೂಪಾಯಿಗೆ ಶ್ರೀ ಸ್ವಾಮಿಯ ನಿಶಾನೆಯನ್ನು ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವರಮುನಿ ಶಿವಕುಮಾರ್ ಅವರು ಪಡೆದುಕೊಂಡರು.

ನಗರದಲ್ಲಿ ಇಂದು ಸೈಕಲ್ ವಿತರಣೆ

ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಇಂದು 44ನೇ ವಾರ್ಡಿನ ಮಹಾಲಕ್ಷ್ಮಿ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಮನವೊಲಿಸಿದರು.

ಗೊಲ್ಲರಹಳ್ಳಿಯಲ್ಲಿ ನಾಡಿದ್ದು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ  ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ  ಬ್ರಹ್ಮ ರಥೋತ್ಸವ ಇದೇ ದಿನಾಂಕ 17 ರಂದು ಸಂಜೆ  4ಕ್ಕೆ ಜರುಗಲಿದೆ.

ಅಂಬೇಡ್ಕರ್ ಸಂವಿಧಾನದಲ್ಲಿ ಸಮ ಸಮಾಜದ ದೃಷ್ಟಿಕೋನ : ಡಿಸಿ

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸಮಾನತೆ, ಭ್ರಾತೃತ್ವದ ಪರಿಕಲ್ಪನೆಗಳು ಹಾಗೂ ಸಮ ಸಮಾಜದ ದೃಷ್ಟಿಕೋನಗಳಿವೆ. ಅಂತಹ ಆದರ್ಶ ಪುರುಷ ಹಾಕಿಕೊಟ್ಟಂತಹ ಸಿದ್ಧಾಂತಗಳನ್ನು ಪಾಲಿಸಿ ಅಸ್ಪೃಶ್ಯತೆ ವಿರೋಧಿಗಳಾಗಿ, ಸಮ ಸಮಾಜದ ನಿರ್ಮಾಣ ಮಾಡಲು ನಾವು ಕೂಡ ಕಾರಣೀಭೂತರಾಗಬೇಕಿದೆ

ಇಂದು ಬಕ್ಕೇಶ್ವರ ರಥೋತ್ಸವ : ನೂತನ ರಥದ ವಿಶೇಷತೆ

ಶಿವಾಂಶ ಸಂಭೂತರಾಗಿ ಗುಮ್ಮನೂರಿನಲ್ಲಿ  ಅವತರಿಸಿ, ದೇಶ ಪರ್ಯಟನೆ ಮಾಡಿ, ಹರಿಹರ ಕ್ಷೇತ್ರದಲ್ಲಿ ಸ್ವಲ್ಪ ಕಾಲ ನೆಲೆಸಿ, ನಂತರ ದಾವಣಗೆರೆಗೆ ಬಂದು ನೆಲೆಸಿ ಲೀಲಾ ಪವಾಡಗಳನ್ನು ಮೆರೆಯುತ್ತಾ ಚೌಕಿಪೇಟೆಯಲ್ಲಿ ಲಿಂಗೈಕ್ಯರಾಗಿ ಸದ್ಭಕ್ತರನ್ನು ಹರಸುತ್ತಿರುವ ಶ್ರೀ ಗುರು ಶಿವಯೋಗಿ ಬಕೇಶ್ವರ ಸ್ವಾಮಿಯ ರಥೋತ್ಸವ ಇಂದು ನಡೆಯಲಿದೆ.  

ಅಸಗೋಡು ವಡ್ಡರಹಟ್ಟಿ ಗ್ರಾಮಸ್ಥರಿಂದ ಪ್ರಭಾ ಎಸ್ಸೆಸ್ಸೆಂಗೆ ಬೆಂಬಲ

ಜಗಳೂರು ವಿಧಾನಸಭಾ ಕ್ಷೇತ್ರದ ಅಸಗೋಡು ವಡ್ಡರಹಟ್ಟಿ ಗ್ರಾಮದ ನೂರಾರು ಗ್ರಾಮಸ್ಥರು ಇಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಲಾಗುವುದು

ಕಾಂಗ್ರೆಸ್‍ಗೆ ಪಾಲಿಕೆ ಬಿಜೆಪಿ ಸದಸ್ಯ ಎಲ್.ಡಿ. ಗೋಣೆಪ್ಪ ಬೆಂಬಲ

ಮಹಾನಗರ ಪಾಲಿಕೆಯ ಬಿಜೆಪಿ  ಸದಸ್ಯ ಎಲ್.ಡಿ.ಗೋಣೆಪ್ಪ ಅವರು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸಿಎಂ ಅರವಿಂದ್ ಕೇಜ್ರಿವಾಲ್‌ ಬಂಧನ ಖಂಡಿಸಿ ಎಎಪಿ ಸತ್ಯಾಗ್ರಹ

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಕ್ರಮ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ ನಡೆಸಿದರು

error: Content is protected !!