ಲೋಕಾಯುಕ್ತ ಬಲಪಡಿ ಸುವಂತೆ ಒತ್ತಾಯಿಸಿ, ಮಾ. 19 ರಿಂದ 22 ರವರೆಗೆ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿಧಾ ನದಿಂದ ಬೆಂಗಳೂರಿನಲ್ಲಿರುವ ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ಕುಣಿಗಲ್ ಹೆಚ್.ಜಿ. ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿ ಸಂಗ್ರಹ
ಮಂದಾರ ಶಾಲೆಯ ಹಳದಮ್ಮ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿ
ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧನೆ ಮಾಡಿರುವ ಮಹಿಳೆಯರಿಗೆ ಕೊಡಲಾಗುವ ಮಹಿಳಾ ಸಾಧಕಿ ಪ್ರಶಸ್ತಿಯು ತ್ಯಾವಣಿಗೆ ಗ್ರಾಮದ ಸೃಜನಾ ಗ್ರಾಮೀಣಾ ಭಿವೃದ್ಧಿ ಸಂಸ್ಥೆ, ಮಂದಾರ ಹಿರಿಯ ಪ್ರಾಥಮಿಕ ಶಾಲೆ ಕಾರ್ಯದರ್ಶಿ ಆರ್. ಹಳದಮ್ಮ ಅವರಿಗೆ ಲಭಿಸಿದೆ.
ಕುರುವತ್ತಿ ಬಸವೇಶ್ವರ ಪಾದಯಾತ್ರೆ ರದ್ದು
ಕೋವಿಡ್-19 ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಈ ಬಾರಿಯ 17ನೇ ವರ್ಷದ ಕುರುವತ್ತಿ ಪಾದಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಕುರುವತ್ತಿ ಬಸವೇಶ್ವರ ಪಾದ ಯಾತ್ರೆ ಸೇವಾ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಮಾರನಹಳ್ಳಿ: ಕೆರೆಗೆ ಹಾಕಿದ್ದ ತ್ಯಾಜ್ಯ ಸ್ವಚ್ಛ ಮಾಡಿಸಿದ ಉಪ ತಹಶೀಲ್ದಾರ್
ಮಲೇಬೆನ್ನೂರು : ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಹಾಕಲಾಗಿದ್ದ ಘನತ್ಯಾಜ್ಯ ವಸ್ತುಗಳನ್ನು ಶನಿವಾರ ಕಂದಾಯ ಇಲಾಖೆ ಅಧಿಕಾರಿಗಳು ಸ್ವಚ್ಛತೆ ಮಾಡಿಸಿದ್ದಾರೆ.
ಕೋಡಿ ಕ್ಯಾಂಪ್ನಲ್ಲಿ ಇಂದು ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ
ಮಾಗಾನಹಳ್ಳಿ ಕೋಡಿ ಕ್ಯಾಂಪ್ನ ಶ್ರೀ ಗುರು ಕೊಟ್ಟೂರೇಶ್ವರ ನಗರದಲ್ಲಿರುವ ಶ್ರೀ ಗುರು ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ
ಪಾಲಿಕೆಯಿಂದ ಶಾಲೆ ಬಿಟ್ಟ ಮಕ್ಕಳ ಸರ್ವೆ
ಮಹಾನಗರ ಪಾಲಿಕೆಯ ಸಿಬ್ಬಂದಿ ಸರ್ವೆಗಾಗಿ ಬಂದಾಗ ಅವರಿಗೆ ಬೇಕಾದ ದಾಖಲೆಗಳಾದ ರೇಷನ್ ಕಾರ್ಡ್, ಆಧಾರ್ ಕಾರ್ಡ್ಗಳನ್ನು ನೀಡಿ, ಸರ್ವೆ ಕಾರ್ಯ ಯಶಸ್ವಿಯಾಗಲು ಸಹಕಾರ ನೀಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ಕೋರಿದ್ದಾರೆ.
ಮಸೀದಿ ಮೇಲಿನ ಅನಧಿಕೃತ ಮೈಕ್ ತೆರವಿಗೆ ಶ್ರೀರಾಮ ಸೇನೆ ಆಗ್ರಹ
ರಾಜ್ಯಾದ್ಯಂತ ಮಸೀದಿಗಳ ಮೇಲಿರುವ ಅನಧಿಕೃತ ಮೈಕ್ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಏಪ್ರಿಲ್ ಕೊನೆ ವಾರದಲ್ಲಿ ಹೋರಾಟ ನಡೆಸುವು ದಾಗಿ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಮಾ ನಾಗರಾಜ್ ಅವರಿಗೆ `ವನಿತಾ ಸೇವಾ’ ಪ್ರಶಸ್ತಿ ಪ್ರದಾನ
ವನಿತಾ ಸಮಾ ಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ‘ವನಿತಾ ಉತ್ಸವ’ ಸಮಾ ರಂಭವು ಇದೇ ದಿನಾಂಕ 8 ರಂದು ಸಂಜೆ 5.30 ಕ್ಕೆ ನಗರದ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದೆ.
ಅಂಗವಿಕಲರಿಗೆ ಸೌಲಭ್ಯಗಳು ಮರೀಚಿಕೆ
ರಾಜ್ಯದಲ್ಲಿ ಅಂಗವಿಕಲರಿಗೆ ಸಿಗಬೇಕಾದ ಸವಲತ್ತುಗಳು ಮರೀಚಿಕೆಯಾಗಿವೆ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಸಮರ ಸೇನೆ ಅಂಗವಿಕಲರ ಘಟಕದ ರಾಜ್ಯಾಧ್ಯಕ್ಷ ಪರಶುರಾಮ್ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೊಟ್ಟೂರಿಗೆ ಪಾದಯಾತ್ರೆ ನಿಷೇಧ
ಕಂಚಿಕೇರಿಯಿಂದ ಅರಸೀಕೆರೆವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೊಟ್ಟೂರು ಪಾದಯಾತ್ರಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಸವಿತಾ ಸಮಾಜ ಸಂಘಟನೆ ಕೆಲವರಿಗೆ ಸೀಮಿತ
ಜಗಳೂರು : ಸವಿತಾ ಸಮಾಜ ಸಂಘಟನೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಸವಿತಾ ಸಮಾಜದ ಮುಖಂಡ ಮೋಹನ್ ಬೇಸರ ವ್ಯಕ್ತಪಡಿಸಿದರು.
24 ಕೆರೆ ತುಂಬಿಸುವ ಯೋಜನೆಗೆ 48 ಕೋಟಿ ರೂ. ಅನುದಾನ
ಏತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ ವ್ಯಾಪ್ತಿಯ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಜಲ ಸಂಪನ್ಮೂಲ ಇಲಾಖೆ ವತಿಯಿಂದ ರೂ.48 ಕೋಟಿಗಳ ಅನುದಾನವನ್ನು ಸಚಿವ ಸಂಪುಟದ ಅನುಮೋದನೆಯೊಂದಿಗೆ, ಸರ್ಕಾ ರದಿಂದ ಮಂಜೂರು ಮಾಡ ಲಾಗಿದೆ
ಕಾರ್ಯದರ್ಶಿ ಸ್ಥಾನಕ್ಕೆ ಎ. ನಸರುಲ್ಲಾ ರಾಜೀನಾಮೆ
ಹರಿಹರ : ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ (ರಿ)ಹರಿಹರ ಶಾಖೆಯ ಕಾರ್ಯದರ್ಶಿ ಸ್ಥಾನಕ್ಕೆ ನಗರಸಭೆಯ ಪ್ರಥಮ ದರ್ಜೆ ಸಹಾಯಕ ಎ. ನಸರುಲ್ಲಾ ರಾಜೀನಾಮೆ ನೀಡಿದ್ದಾರೆ .
ಅಡಿಕೆ ಹರಳು ಉದುರುವ, ಹಿಂಗಾರ ಒಣಗುವ, ಹಿಂಗಾರ ತಿನ್ನುವ ಸಮಸ್ಯೆ
ಅಡಿಕೆಯಲ್ಲಿ ಹಿಂಗಾರ (ಹೊಂಬಾಳೆ) ತಿನ್ನುವ ಹುಳುಗಳು, ಹರಳು ಉದು ರುವುದು, ಹಿಂಗಾರು ಕೊಳೆ ರೋಗ ಕಾಣಿಸಿಕೊಂಡಿದ್ದು ಅದನ್ನು ತಡೆಗಟ್ಟಲು ರೈತರು ಅಗತ್ಯ ಸಂರಕ್ಷಣಾ ಕ್ರಮ ಗಳನ್ನು ಕೈಗೊಳ್ಳಬೇಕು
ಹೊಂಬಾಳೆಯಲ್ಲಿ ಗಣಪತಿ
ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಪರಿಕಲ್ಪನೆ ನಮ್ಮದು. ಇದಕ್ಕೆ ಸಾಕ್ಷಿ ನೀಡುವಂತೆ ಅಡಿಕೆ ಗಿಡದ ಹೊಂಬಾಳೆಯಲ್ಲಿ ವಿಘ್ನ ನಿವಾರಕ ಗಣಪನ ಆಕೃತಿ ಮೈ ದಾಳಿ ಅಚ್ಚರಿ ಮೂಡಿಸಿದೆ.
ಕೊಟ್ಟೂರು ಪಾದಯಾತ್ರೆ ರದ್ದು : ಕೋಡಿ ಕ್ಯಾಂಪ್ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ
ನಾಡಿನ ಹೆಸರಾಂತ ಕೊಟ್ಟೂರಿನ ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ರಥೋತ್ಸವವು ಇದೇ ದಿನಾಂಕ 7ರ ಭಾನುವಾರ ನಡೆಯಲಿ ದ್ದು, ಈ ರಥೋತ್ಸವಕ್ಕೆ ದಾವಣಗೆರೆಯಿಂದ ಹೋಗಬೇಕಿದ್ದ ಪಾದಯಾತ್ರೆಯನ್ನು ರದ್ದುಪಡಿಸಲಾಗಿದೆ.
ಹಲ್ಲೆ ಪ್ರಕರಣ : ಎಲ್ಲಾ ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ಒತ್ತಾಯ
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಹಲ್ಲೆಗೊಳಗಾದ ಜಿ.ಡಿ. ಮಾಲತೇಶ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಇ-ಎಪಿಕ್ ಮೂಲಕ ಉಚಿತ ಮತದಾರರ ಗುರುತಿನ ಚೀಟಿ
ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಇ-ಎಫಿಕ್ (e-EPIC) ನ್ನು ಪರಿಚಯಿಸಿದ್ದು ಮತದಾರರು http://nvsp.in Voter Helpline Mobile app(Android/OS), http://voterportel.eci.gov.in/ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ
ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಸಹಕರಿ ಸುವಂತೆ ಹಿರಿಯ ಉಪ ನೋಂದಣಾಧಿಕಾರಿ ಗಳಾದ ಎಲ್.ರಾಮಕೃಷ್ಣ, ಜಿ.ಪ್ರಸನ್ನ ಮನವಿ ಮಾಡಿದ್ದಾರೆ.

ಸಮಾಜದ ಆಸ್ತಿಯಾಗಿ ಬೆಳೆಯಿರಿ
ರಾಂಕ್ ಪಡೆಯುವಂತಹ ಕನಸುಗಳನ್ನು ಬಿತ್ತಿ, ಪೋಷಿಸಿ, ಸಾಕ್ಷಾತ್ಕರಿಸಿಕೊಳ್ಳಿ. ಆ ಮೂಲಕ ನಿಮ್ಮ ಕುಟುಂಬದ, ಸಮಾಜದ ಆಸ್ತಿಯಾಗಿ ಬೆಳೆಯಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗೃಹಿಣಿಯ ಸರ ಅಪಹರಣ
ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಗೃಹಿಣಿಯೋರ್ವರ 3 ಲಕ್ಷದ 20 ಸಾವಿರ ಮೌಲ್ಯದ ಎರಡು ಬಂಗಾರದ ಸರಗಳನ್ನು ಕಳ್ಳನೋರ್ವ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನ್ಯಾಯಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ
ನ್ಯಾಯಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ ಮಾಡಲಾಗಿದೆ.
ಬಾಪೂಜಿ ಎಂಬಿಎ ಕಾಲೇಜಿಗೆ 4 ರ್ಯಾಂಕ್ಗಳು
ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಅಂಡ್ ರೀಸರ್ಚ್ ಎಂಬಿಎ ಕಾಲೇಜಿಗೆ ಎಂಬಿಎ ಪರೀಕ್ಷೆಯಲ್ಲಿ 4 ರಾಂಕ್ ಲಭಿಸಿದೆ. ಕಾಲೇಜಿನ ಕೆ.ಸಿ. ಅಜಯಕುಮಾರ್ 4ನೇ ರಾಂಕ್, ಅಕ್ಷತಾ ಪಾಟೀಲ್ 7ನೇ ರಾಂಕ್, ಕೆ.ಜೆ. ಅಶ್ವಿನಿ 7ನೇ ರಾಂಕ್ ಮತ್ತು ಅಪೇಕ್ಷಾ ಎಸ್. ಪತಂಗೆ 9ನೇ ರಾಂಕ್ ಗಳಿಸಿದ್ದಾರೆ.
ಸರ್ಕಾರಿ ನೌಕರರ ಒಕ್ಕೂಟದಿಂದ ಮನವಿ
ಹೊನ್ನಾಳಿ ತಾಲ್ಲೂಕು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಹೆಚ್.ಕೆ ಸಣ್ಣಪ್ಪ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಹಶೀಲ್ದಾರ್ ಸುರೇಶ್ರವರಿಗೆ ಮನವಿ ಸಲ್ಲಿಸಲಾಯಿತು.
ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ
ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಹಿರಿಯ ಉಪ ನೋಂದಣಾಧಿಕಾರಿಗಳಾದ ಎಲ್.ರಾಮಕೃಷ್ಣ, ಜಿ.ಪ್ರಸನ್ನ ಮನವಿ ಮಾಡಿದ್ದಾರೆ. ಸರ್ವರ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರ ಸಮಸ್ಯೆ ನಿವಾರಿಸಿ, ಸಾರ್ವಜನಿಕರಿಗೆ ತಿಳಿಸಿದ ನಂತರವೇ ನೋಂದಣಿ ಕಾರ್ಯಕ್ಕೆ ಕಚೇರಿಗೆ ಆಗಮಿಸುವಂತೆ ಅವರು ಹೇಳಿದ್ದಾರೆ.
ಕಾಟಿಕ್ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯ
ಶೈಕ್ಷಣಿಕ, ಆರ್ಥಿಕ, ಸಾಮಾಜಿ ಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕಾಟಿಕ್ (ಕಲಾಲ್) ಸಮಾಜ ವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ದಾವಣಗೆರೆ ಸಿಟಿ ಮತ್ತು ಹರಿಹರ ಟೌನ್ ಕಾಟಿಕ್ ಸಂಘದ ಅಧ್ಯಕ್ಷ ಪಿ. ಮಾಲತೇಶ್ ಕಲಾಲ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಾಳೆ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕರ ಬೆಂಗಳೂರು ಚಲೋ
ಪಿಂಚಣಿ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ನಾಡಿದ್ದು ದಿನಾಂಕ 2 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ