ಬೆಂಗಳೂರು : ಕೊರೊನಾ ಸಾಂಕ್ರಾಮಿಕ ದಿಂದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯ ಪುನಶ್ಚೇತನಕ್ಕೆ ಹೊಸ ತೆರಿಗೆಯ ಹೊರೆ ಹೇರದೆ, ಹೊಸ ಕಾರ್ಯಕ್ರಮಗಳನ್ನೂ ಪ್ರಕಟಿಸದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂಗಡ ಪತ್ರದಲ್ಲಿ ಅಭಿವೃದ್ಧಿ ಮಂತ್ರವನ್ನು ಜಪಿಸಿದ್ದಾರೆ.
ಪ್ರಮುಖ ಸುದ್ದಿಗಳು

ಮಹಿಳೆ ಮಾನಸಿಕವಾಗಿ ಸಬಲೆ : ನ್ಯಾ.ಕೆ.ಬಿ. ಗೀತಾ
ಮಹಿಳೆ ದೈಹಿಕವಾಗಿ ಅಬಲೆಯಾಗಿದ್ದರೂ, ಮಾನಸಿಕವಾಗಿ ಸಬಲೆಯಾಗಿದ್ದಾಳೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಬಿ.ಗೀತಾ ಹೇಳಿದರು.

ಹೆಣ್ಣಾಗಲಿ-ಗಂಡಾಗಲಿ ಮಕ್ಕಳೇ, ಅಂಧ ವಿಶ್ವಾಸ ಬೇಡ
ಹೆಣ್ಣಾಗಲಿ, ಗಂಡಾಗಲಿ ಮಕ್ಕಳೇ. ಅವರನ್ನೇ ಅಭಿಮಾನದಿಂದ ಬೆಳೆಸಿ, ಅವರಲ್ಲೇ ಎಲ್ಲವನ್ನೂ ಕಾಣಬೇಕು. ಆದರೆ, ಗಂಡೇ ಬೇಕೆಂಬ ಅಂಧ ವಿಶ್ವಾಸಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಬೆಲೆ ಏರಿಕೆಯ ಪ್ರತಿಕೃತಿ ದಹಿಸಿ ಪ್ರತಿಭಟನೆ
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಇಂದು ಬೆಲೆ ಏರಿಕೆಯ ಪ್ರತಿಕೃತಿ ದಹನ ಮಾಡುವುದರ ಮೂಲಕ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ರಾಜ್ಯ ಬಜೆಟ್ ಬಗ್ಗೆ ಅಭಿಪ್ರಾಯಗಳು…
ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ ಮುಂಗಡ ಪತ್ರದ ಬಗ್ಗೆ ನಗರದ ಜನತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೊಟ್ಟೂರು ತೇರು
ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಕೇಂದ್ರದ ಸರ್ವಾಧಿಕಾರಿ ಆಡಳಿತ ಮುಗಿಯುವವರೆಗೂ ಚಳುವಳಿಗಳ ಅಲೆ ಬಲವಾಗಲಿದೆ : ನೂರ್ ಶ್ರೀಧರ್
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ವಾಧಿಕಾರಿ ಆಡಳಿತ ಮುಗಿದು ಪ್ರಜಾಪ್ರಭುತ್ವ ಬರುವವರೆಗೊ ದೇಶದಲ್ಲಿ ನಡೆಯುತ್ತಿರುವ ಚಳುವಳಿಗಳ ಅಲೆ ಬಲವಾಗುತ್ತಲೇ ಹೋಗಲಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷರೂ ಆಗಿರುವ ಸಾಮಾಜಿಕ ಕಾರ್ಯಕರ್ತ ನೂರ್ ಶ್ರೀಧರ್ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಪರಿಪೂರ್ಣ ವಿದ್ಯಾವಂತರನ್ನಾಗಿಸಿ
ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿಸದೇ ಜೀವನ ಮೌಲ್ಯ ಬಿತ್ತಿ ಪರಿಪೂರ್ಣ ವಿದ್ಯಾವಂತರನ್ನಾಗಿ ರೂಪಿಸುವಂತೆ ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎನ್.ಟಿ. ಮಂಜುನಾಥ್ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಒಳ ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಪಾದಯಾತ್ರೆ
ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗೆ ನ್ಯಾ. ಸದಾಶಿವ ಆಯೋಗ ನೀಡಿರುವ ಒಳ ಮೀಸಲಾತಿ ವರದಿಗೆ ಆಗ್ರಹಿಸಿ ಶೀಘ್ರವೇ ಹರಿಹರದಿಂದ-ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಈ ವಿಚಾರದಲ್ಲಿ ಆದಿಜಾಂಬವ ಪೀಠ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಪೀಠಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ .

ನಿಷ್ಠಾವಂತ ವೈದ್ಯರುಗಳಾಗಿ ಸೇವೆ ಸಲ್ಲಿಸಲು ಎಸ್ಸೆಸ್ ಕರೆ
ಕಳೆದ ಐದೂ ವರೆ ವರ್ಷಗಳ ಕಾಲ ನಿಷ್ಠೆಯಿಂದ ವೈದ್ಯ ಕೀಯ ಅಭ್ಯಾಸ ಮಾಡಿ ಪದವೀಧರರಾಗಿ ದ್ದೀರಿ. ಮುಂದೆ ನಿಷ್ಠಾವಂತ ವೈದ್ಯರಾಗುವ ಮೂಲಕ ಜೆ.ಜೆ.ಎಂ. ಕಾಲೇಜಿನ ಕೀರ್ತಿ ಯನ್ನು ವಿಶ್ವದಗಲಕ್ಕೂ ಕೊಂಡೊಯ್ಯುತ್ತೀರಿ.

ಆರೋಗ್ಯ ಕ್ಷೇತ್ರದಲ್ಲಿ ಜನೌಷಧಿ ಕೇಂದ್ರಗಳಿಂದ ಕ್ರಾಂತಿಕಾರಿ ಬದಲಾವಣೆ
ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಸಾ ಯನಿಕ ಮತ್ತು ರಸಗೊಬ್ಬರ ಸಚಿವಾಲಯದಿಂದ ಆರಂಭವಾಗಿರುವ ಜನೌಷಧಿ ಕೇಂದ್ರಗಳು ದೇಶದ ಆರೋಗ್ಯ ವಲಯದಲ್ಲಿ ಮಹತ್ತರ ಕ್ರಾಂತಿ ಮಾಡಿವೆ.

ಭಾರೀ ಬೇಡಿಕೆಯ ಬಡವರ ಫ್ರಿಡ್ಜ್
ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗಿದೆ. ಆರಂಭದಲ್ಲಿಯೇ ಬಿಸಿಲ ಬೇಸಿಗೆಗೆ ಜನರು ಉಸ್ಸಪ್ಪಾ ಎನ್ನುತ್ತಿದ್ದಾರೆ. ಬಡವರ ಫ್ರಿಡ್ಜ್ ಎಂದೇ ಹೇಳಲಾಗುವ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸಾರ್ವಜನಿಕ ದೂರುಗಳಿಗೆ `ಪರಿಹಾರ’
ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ
ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಲಿದೆ
ಮಡಿವಾಳ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅತ್ಯಂತ ಜಾಣ್ಮೆ, ತಂತ್ರಜ್ಞಾನದಿಂದ, ವ್ಯವಸ್ಥಿತವಾಗಿ ನಾವುಗಳು ರಾಜಕೀಯ ಲಾಬಿ ನಡೆಸಿ ಪಡೆದುಕೊಳ್ಳಬೇಕಾಗುತ್ತದೆ.

ಆಳವಾದ ಅಧ್ಯಯನದಿಂದ ಭವಿಷ್ಯದ ದಾರಿ ಸಿದ್ಧಿಸಲಿದೆ
ಯಶಸ್ಸು ಕಾಣಲು ಎಲ್ಲಾ ಕ್ಷೇತ್ರ ಗಳಲ್ಲೂ ಅವಕಾಶಗಳಿದ್ದರೂ ನಿರ್ದಿಷ್ಟವಾಗಿ ಒಂದೇ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ಶ್ರಮ ವಹಿಸಿದರೆ ಗಾಢವಾದ ಜಾನ ಸಂಪಾದಿಸಿ ಪರಿಪೂರ್ಣ ಸಾಧನೆ ಮಾಡಲು ಸಾಧ್ಯವಾಗುತ್ತದೆ
27ರಂದು ಲೋಕ್ ಅದಾಲತ್
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಭ, ಶೀಘ್ರ ಹಾಗೂ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಲು ನಡೆಸಲಾಗುವ ಬೃಹತ್ ಲೋಕ್ ಅದಾಲತ್ ಮಾರ್ಚ್ 27ರ ಶನಿವಾರದಂದು ನಡೆಯಲಿದೆ

ವಿಕಲಚೇತನರ ಸೌಲಭ್ಯಕ್ಕೆ ಲಂಚದ ಕಾಟ
ವಿಕಲಚೇತನ ರಿಗೆ ಯು.ಡಿ.ಐ.ಡಿ. ನೀಡಲು ಹಣ ಕೇಳಲಾಗುತ್ತಿದೆ ಹಾಗೂ ಅಂಗವೈಕಲ್ಯತೆ ಪ್ರಮಾಣ ಪತ್ರ ನೀಡಲು ಹಣ ಪಡೆಯಲಾ ಗುತ್ತಿದ್ದು, ಇದು ದೊಡ್ಡ ದಂಧೆಯೇ ಆಗಿದೆ

ಲಿಂ.ಸದ್ಯೋಜಾತ ಶ್ರೀಗಳ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣವಾಗಲಿ
ಶಿಕ್ಷಣ ಪ್ರೇಮಿಗಳೂ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಆಗಿದ್ದ ಲಿಂಗೈಕ್ಯ ಶ್ರೀ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಹೆಸರಿನಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಿಸುವ ಬಗ್ಗೆ ಸಮಾಜ ಬಾಂಧವರು ಚಿಂತನೆ ನಡೆಸಬೇಕು

ದೊಡ್ಡ ಗುಣಗಳಿಂದ ದೊಡ್ಡ ವ್ಯಕ್ತಿಯಾಗಲು ಸಾಧ್ಯ
ಯಾವ ವ್ಯಕ್ತಿ ದೊಡ್ಡವನಾಗಲು ಬಯಸುತ್ತಾನೋ, ದೊಡ್ಡವ ನಾಗಬೇಕೆಂಬ ಹಂಬಲವಿದ್ದರೆ ದೊಡ್ಡವನಾಗಲು ಸಾಧ್ಯವಿಲ್ಲ. ದೊಡ್ಡ ಗುಣಗಳಿಂದ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ತೆರವಾಗಿರುವ ಎಪಿಎಂಸಿ ಒಂದು ಸ್ಥಾನಕ್ಕೆ ಚುನಾವಣೆ
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಇದೇ ದಿನಾಂಕ 18ರಂದು ಉಪ ಚುನಾವಣೆ ನಡೆಯಲಿದ್ದು, ಎಸ್.ಕೆ. ಪವಿತ್ರ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.

ಬೆಲೆ ಏರಿಕೆ ತಡೆಗಟ್ಟಿ ಜನಸಾಮಾನ್ಯರ ಹೊರೆ ಇಳಿಸಲು ಆಗ್ರಹ
ತೈಲಗಳು, ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆ ಕಾಳುಗಳು ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಂಘಟನಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜೀವನ ಹಿತ, ಪಾಲಿಕೆ ಕುಂಠಿತ : ಸುಲಲಿತ ಜೀವನ ಸಮೀಕ್ಷೆ: ರಾಜ್ಯದಲ್ಲಿ ದಾವಣಗೆರೆ ಪ್ರಥಮ
ನವದೆಹಲಿ, ಮಾ. 5 – ಸುಲಲಿತ ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಸುಲಲಿತ ಜೀವನ ನಿರ್ವಹಣೆ ಹಾಗೂ ನಗರ ಪಾಲಿಕೆಗಳ ಸಾಧನೆಯ ಸೂಚ್ಯಂಕದಲ್ಲಿ ದಾವಣಗೆರೆಗೆ ಮಿಶ್ರಫಲ ದೊರೆತಿದೆ.

ಆವರಗೊಳ್ಳ ರಥೋತ್ಸವ
ದಾವಣಗೆರೆ ತಾಲ್ಲೂಕು ಆವರಗೊಳ್ಳ ಕ್ಷೇತ್ರದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಬುಧವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.